Slide
Slide
Slide
previous arrow
next arrow

ಸದನದಲ್ಲಿ ಜಿಲ್ಲೆಯ ಸಮಸ್ಯೆ ಕುರಿತು ಧ್ವನಿ ಎತ್ತಿದ ಶಾಸಕ ಭೀಮಣ್ಣ

300x250 AD

ಶಿರಸಿ: ಜಿಲ್ಲೆಯ ಜನತೆ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ವಿಧಾನಸಭೆ ಅಧಿವೇಶನದಲ್ಲಿ ಸಮರ್ಥವಾಗಿ ವಾದ ಮಂಡಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದೇ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಪ್ರಥಮ ಅಧಿವೇಶನದಲ್ಲಿ ಜನತೆಯ ಸಮಸ್ಯೆಯನ್ನು ಸದನದ ಮುಂದಿಟ್ಟು ಭೀಮಣ್ಣ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿರುವ ಅರಣ್ಯ ಅತಿಕ್ರಮಣ ದಾರರಿಗೆ ಪಟ್ಟಾ ನೀಡಬೇಕು. ದೇವರಾಜ ಅರಸು ಅವರು ಜಾರಿಗೊಳಿಸಿದ ಉಳುವನೆ ಒಡೆಯ ಯೋಜನೆಯಲ್ಲಿ ಹಲವು ರೈತರಿಗೆ ಅನುಕೂಲವಾಗಿದೆ. ಆದರೇ ಇನ್ನುಳಿದ ರೈತರಿಗೂ ಇದರ ಪ್ರತಿಫಲ ದೊರೆಯಬೇಕು. ಅಲ್ಲದೇ ಉತ್ತರ ಕನ್ನಡ ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದೆಡೆ ಕರಾವಳಿ, ಮತ್ತೊಂದೆಡೆ ಮಲೆನಾಡು ಹಾಗೂ ಕೆಲವು ಪ್ರದೇಶ ಬಯಲು ಸೀಮೆಯನ್ನು ಹೊಂದಿದ0ತ ಪ್ರದೇಶ. ಪ್ರಸಕ್ತ ವರ್ಷ ಘಟ್ಟದ ಮೇಲ್ಬಾಗದಲ್ಲಿ ಮಳೆ ವಿಪರೀತ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಆ ನಿಟ್ಟಿನಲ್ಲಿ ಸರಕಾರ ನಮ್ಮ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಮಲೆನಾಡಿನ ಪ್ರದೇಶದಲ್ಲಿ ಹೆಚ್ಚಾಗಿ ಇರುವವರು ಅಡಿಕೆ ಬೆಳೆಗಾರರು. ಈ ವರ್ಷ ಕಡಿಮೆ ಮಳೆಯಿಂದ ಅಡಿಕೆ ಬೆಳೆಗೆ ತೊಂದರೆ ಉಂಟಾಗಿದೆ. ಎಲೆ ಚುಕ್ಕೆ ರೋಗ, ಅಡಿಕೆ ಮಿಳ್ಳೆ ಉದುರುವುದು ಇದರಿಂದ ಅಡಿಕೆ ಬೆಳೆಗಾರ ತನ್ನ ಫಸಲನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದು ಇಂತಹ ಅಡಿಕೆ ಬೆಳೆಗಾರರಿಗೆ ರಕ್ಷಣೆ ನೀಡಬೇಕು ಎಂದು ತನ್ನ ವಾದವನ್ನು ಸದನದ ಮುಂದೆ ಪ್ರಸ್ತುತ ಪಡಿಸಿದರು. ಸದನದಲ್ಲಿ ಜಿಲ್ಲೆಯ ಸಮಸ್ಯೆಯನ್ನು ಸಮರ್ಥವಾಗಿ ಮಂಡಿಸಿದ ಶಾಸಕ ಭೀಮಣ್ಣ ನಾಯ್ಕ ಅವರನ್ನು ಶಿರಸಿಯ ಜನತೆ ಹಾಗೂ ಕಾರ್ಯಕರ್ತರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top